Site icon Karnataka 360

Shreyas Iyer | ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ವೀರೇಂದ್ರ ಸೆಹ್ವಾಗ್

ಕ್ರೀಡೆ | ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತ ಟೆಸ್ಟ್ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, 18 ಸದಸ್ಯರ ಬಲಿಷ್ಠ ತಂಡದಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ಹೆಸರು ಕಾಣೆಯಾಗಿದ್ದು ಹಲವು ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ. ಯುವ ಬ್ಯಾಟರ್ ಶುಭಮನ್ ಗಿಲ್ ಅವರನ್ನು ಟೆಸ್ಟ್ ತಂಡದ ಹೊಸ ನಾಯಕನಾಗಿ ನೇಮಕ ಮಾಡಲಾಗಿದೆ.

ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಸಮಾಧಾನ

ಇದಕ್ಕೂ ಮೊದಲು ದೇಶೀಯ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಶ್ರೇಯಸ್ ಅಯ್ಯರ್‌ಗೆ  (Shreyas Iyer) ಅವಕಾಶ ದೊರೆಯದಿರುವುದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag) ಅಸಮಾಧಾನಕ್ಕೆ ಕಾರಣವಾಗಿದೆ. ಕ್ರಿಕ್‌ಬಝ್‌ಚಾಟ್‌ನಲ್ಲಿ ಮಾತನಾಡಿದ ಸೆಹ್ವಾಗ್, ಅಯ್ಯರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ, ನಾಯಕತ್ವದ ಗುಣವಿದೆ. ಇಂಥಾ ಆಟಗಾರರನ್ನು ಕೈಬಿಡುವುದು ನ್ಯಾಯವಲ್ಲ ಎಂದು ಕಿಡಿಕಾರಿದ್ದಾರೆ.

ಅಯ್ಯರ್ ಟೆಸ್ಟ್‌ಗಳಲ್ಲಿ ಆಡಬಹುದಾದ ಆಟಗಾರ. ವೇಗವಾಗಿ ರನ್ ಗಳಿಸುವ ಶಕ್ತಿಯಿಂದ ಇಂಗ್ಲೆಂಡ್‌ ವಿರುದ್ಧ ಒತ್ತಡ ತರುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಟೀಂ ಇಂಡಿಯಾದ ಅಸ್ತ್ರವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ : India 4th Largest Economy | ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಪಟ್ಟಕ್ಕೇರಿದ ಭಾರತ

ಶ್ರೇಯಸ್ ಅಯ್ಯರ್ (Shreyas Iyer) ಸಾಧನೆ

ಅಯ್ಯರ್‌ ನಂತಹ ಆಟಗಾರರು ಒತ್ತಡದ ಕ್ಷಣಗಳಲ್ಲಿ ತಂಡಕ್ಕೆ ತೂಕ ನೀಡುತ್ತಾರೆ. ಅವರಿಗೆ ಅವಕಾಶ ಕೊಡದೇ ಇರುವುದು ನಿರಾಶೆಕಾರಿಯಾಗಿದೆ ಎಂದು ಸೆಹ್ವಾಗ್ ಅಕ್ಷೇಪ ವ್ಯಕ್ತಪಡಿಸಿದ್ದಾರೆ.

Exit mobile version