ತುಮಕೂರು | ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಗ್ರಾಮ ಪಂಚಾಯತಿ (Gram Panchayat) ಸದಸ್ಯ ಸ್ಥಾನಗಳಿಗೆ ಮೇ 25ರಂದು ಉಪ ಚುನಾವಣೆ (By-election) ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿ ಕ್ಷೇತ್ರದಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಶುಭ ಕಲ್ಯಾಣ್ ಆದೇಶ ಹೊರಡಿಸಿದ್ದಾರೆ.
ಇದನ್ನು ಓದಿ : Cotton Crop | ರಾತ್ರೋ ರಾತ್ರಿ ಹತ್ತಿ ಗಿಡಿ ಕಿತ್ತು ಹಾಕಿದ ದುಷ್ಕರ್ಮಿಗಳು
ಈ ನಿಷೇದಾಜ್ಞೆಯು ಮೇ 23ರ ಸಂಜೆ 5 ರಿಂದ 25ರ ಸಂಜೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ನಿಷೇದಾವಧಿಯಲ್ಲಿ ಚುನಾವಣೆ (By-election) ನಡೆಯಲಿರುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲಾ ತರಹದ ಮದ್ಯದಂಗಡಿಯನ್ನು ಮುಚ್ಚಬೇಕು. ಗ್ರಾಮ ಪಂಚಾಯತಿ (Gram Panchayat) ಸ್ಥಾನಗಳಿಗೆ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿ ಚುನಾವಣೆ ನಡೆಯಲಿದ್ದಲ್ಲಿ ಈ ನಿಷೇಧಾದೇಶ ಅನ್ವಯವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಉಪ ಚುನಾವಣೆ (By-election) ನಡೆಯಲಿರುವ ಗ್ರಾಮ ಪಂಚಾಯತಿಗಳು
ಜಿಲ್ಲೆಯ ತುಮಕೂರು ತಾಲ್ಲೂಕು 37-ಬೆಳಗುಂಬ ಗ್ರಾಮ ಪಂಚಾಯತಿ ವ್ಯಾಪ್ತಿಯ ವಡ್ಡರಹಳ್ಳಿ ಕ್ಷೇತ್ರ ಹಾಗೂ 38-ಹೆಗ್ಗೆರೆ ಗ್ರಾ.ಪಂ.ಯ ವಕ್ಕೋಡಿ-1; ಗುಬ್ಬಿ ತಾಲ್ಲೂಕು 26-ಕುನ್ನಾಲ ಗ್ರಾ.ಪಂ.ಯ ಜೀಗನಹಳ್ಳಿ; ತಿಪಟೂರು ತಾಲ್ಲೂಕು 13-ಹಿಂಡಿಸ್ಕೆರೆ ಗ್ರಾ.ಪಂ.ಯ ಹಿಂಡಿಸ್ಕೆರೆ; ಚಿಕ್ಕನಾಯಕನಹಳ್ಳಿ ತಾಲ್ಲೂಕು 23-ಮುದ್ದೇನಹಳ್ಳಿ ಗ್ರಾ.ಪಂ.ಯ ಆಲದಕಟ್ಟೆ; ತುರುವೇಕೆರೆ ತಾಲ್ಲೂಕು 26-ಹುಲ್ಲೇಕೆರೆ ಗ್ರಾ.ಪಂ.ಯ ಬಳ್ಳೆಕಟ್ಟೆ; ಮಧುಗಿರಿ ತಾಲ್ಲೂಕು 3-ದೊಡ್ಡವೀರಗೊಂಡನಹಳ್ಳಿ ಗ್ರಾ.ಪಂ.ಯ ಗುಂಡ್ಲಹಳ್ಳಿ, 5-ಮರುವೇಕೆರೆ ಗ್ರಾ.ಪಂ.ಯ ಬಂದ್ರೇಹಳ್ಳಿ ಹಾಗೂ 18-ಮುದ್ದೇನಹಳ್ಳಿ ಗ್ರಾ.ಪಂ.ಯ ಪೋಲೇನಹಳ್ಳಿ; ಪಾವಗಡ ತಾಲ್ಲೂಕು 7-ಕನ್ನಮೇಡಿ ಗ್ರಾ.ಪಂ.ಯ ಕಿಲಾರ್ಲಹಳ್ಳಿ, 8-ಬ್ಯಾಡನೂರು ಗ್ರಾ.ಪಂ.ಯ ಗುಂಡ್ಲಾರಹಳ್ಳಿ, 32-ಅರಸೀಕೆರೆ ಗ್ರಾ.ಪಂ.ಯ ಅರಸೀಕೆರೆ-2 ಹಾಗೂ 30-ಚನ್ನಕೇಶವಪುರ ಗ್ರಾ.ಪಂ.ಯ ಕೊತ್ತೂರು-2 ಸೇರಿದಂತೆ ಒಟ್ಟು 13 ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.