ತುಮಕೂರು | ದೇಶಾದ್ಯಂತ 76ನೇ ಗಣರಾಜ್ಯೋತ್ಸವದ (76th Republic Day) ಸಂಭ್ರಮ ಮನೆಮಾಡಿದ್ದು, ಕರ್ನಾಟಕ ರಾಜ್ಯದಲ್ಲೂ ಅದ್ದೂರಿಯಾಗಿ ಆಚರಿಸಲಾಗಿದೆ. ತ್ರಿವಿಧ ದಾಸೋಹಕ್ಕೆ ಹೆಸರಾಗಿರುವ ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಕೂಡ 76ನೇ ಗಣರಾಜ್ಯೋತ್ಸವವನ್ನು (76th Republic Day) ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್, “ಒಂದು ಕಾಲದಲ್ಲಿ ಬಡತನದಲ್ಲಿ ಹೆಜ್ಜೆ ಹಾಕುತ್ತಿದ್ದ ಭಾರತ ಇಂದು ಪ್ರಪಂಚದ ನಾಲ್ಕನೇ ಬಲಿಷ್ಠ ಆರ್ಥಿಕತೆಯ ರಾಷ್ಟ್ರವಾಗಿ ಬೆಳೆದಿದೆ. ಇದು ಪ್ರತಿಯೊಬ್ಬ ಭಾರತೀಯನ ಶ್ರಮ ಮತ್ತು ತ್ಯಾಗದ ಫಲ. ಇಂತಹ ಭಾರತವನ್ನು ನಾವು ಒಗ್ಗಟ್ಟಿನಿಂದ ಕಾಪಾಡಬೇಕು. ಸಮಾನತೆಯ ಆಶಯದೊಂದಿಗೆ ಜೀವನ ಸಾಗಿಸೋಣ,” ಎಂದು ಹಾರೈಸಿದರು.
ಶ್ರೀಮಠದ ಸೇವೆಯ ಡಾ. ಜಿ ಪರಮೇಶ್ವರ್ ಮೆಚ್ಚುಗೆ
ಡಾ. ಶಿವಕುಮಾರ ಮಹಾಸ್ವಾಮಿಗಳ ತತ್ವ ಮತ್ತು ಸೇವೆಯನ್ನು ಸ್ಮರಿಸುತ್ತ, ಡಾ. ಪರಮೇಶ್ವರ್ ಅವರು, “ನೂರಾರು ವರ್ಷಗಳಿಂದ ಶ್ರೀಮಠವು ಕೋಟ್ಯಂತರ ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹ ನೀಡುತ್ತಾ ಸಮಾಜ ಸೇವೆಯಲ್ಲಿ ಹೆಜ್ಜೆ ಇಟ್ಟಿದೆ. ಇಡೀ ಪ್ರಪಂಚದಲ್ಲಿಯೇ ಇಂತಹ ಸೇವೆಯನ್ನು ಮಾಡಿರುವ ಸಂಸ್ಥೆ ಅಪರೂಪ. ಈ ಪರಂಪರೆಯನ್ನು ಶ್ರೀ ಸಿದ್ದಲಿಂಗ ಸ್ವಾಮೀಜಿ ಮುಂದುವರಿಸುತ್ತಿದ್ದಾರೆ,” ಎಂದು ಪ್ರಶಂಸಿಸಿದರು.
ಶ್ರೀ ಸಿದ್ದಲಿಂಗ ಸ್ವಾಮೀಜಿಗಳ (76th Republic Day) ನುಡಿಗಳು
ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಯವರು ಮಾತನಾಡಿ, “ನಾವು ಭಾರತೀಯರಾಗಿ ದೇಶದ ಕುರಿತು ಭಕ್ತಿ, ಶ್ರದ್ಧೆ ಮತ್ತು ಗೌರವವನ್ನು ಹೊಂದಿರಬೇಕು. ರಾಷ್ಟ್ರಗೀತೆ, ರಾಷ್ಟ್ರಧ್ವಜ ಮತ್ತು ಸಂವಿಧಾನಕ್ಕೆ ಗೌರವ ನೀಡುವುದು ನಮ್ಮ ಕರ್ತವ್ಯ. ಸಂವಿಧಾನದ ಆಶಯಗಳನ್ನು ಪಾಲಿಸುವ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸೋಣ,” ಎಂದರು.
ಅವರ ಧ್ಯೇಯ, “ಭಾರತ ದೇಶದ ಸಾಧನೆಗಳನ್ನು ಜಗತ್ತಿಗೆ ಪರಿಚಯಿಸುವ ಮೂಲಕ ದೇಶದ ಗೌರವವನ್ನು ಹೆಚ್ಚಿಸಬೇಕು. ಸೇನೆಯಲ್ಲಿನ ಪ್ರಗತಿ, ಕೃಷಿ, ಶಿಕ್ಷಣ, ವೈಜ್ಞಾನಿಕ ಸಾಧನೆಗಳು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಈ ಶ್ರೀಮಂತ ಸಂಸ್ಕೃತಿಯನ್ನು ಪ್ರದರ್ಶಿಸುವ ಮೂಲಕ ದೇಶದ ಪರಿಪೂರ್ಣತೆ ತೋರಿಸೋಣ,” ಎಂದು ಹೇಳಿದರು.
ಶ್ರೀಮಠದ ಗಣರಾಜ್ಯೋತ್ಸವ (76th Republic Day) ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಓದುವುದರ ಮೂಲಕ ದೇಶದ ಸಂವಿಧಾನದ ಮಹತ್ವವನ್ನು ಹಿಗ್ಗಿಸಲಾಯಿತು. ಶಾಸಕ ಸುರೇಶ್ ಗೌಡ, ಜ್ಯೋತಿ ಗಣೇಶ್, ಶ್ರೀಮಠದ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.