Tumkur | ಪರಮೇಶ್ವರ್ ಆ ನಿರ್ಧಾರ ಬೆಂಬಲಿಸಿದ ಶಾಸಕ ಜ್ಯೋತಿ ಗಣೇಶ್..?

ತುಮಕೂರು | ನಗರದ (Tumkur) ಕೆಲ ಬೀದಿಗಳಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿರುತ್ತದೆ ಎಂದು ಬೇಸರ ವ್ಯಕ್ತಪಡಿಸಿದ ಡಾ: ಜಿ.ಪರಮೇಶ್ವರ್ (Dr. G. Parameshwar), ನಗರ ಪಾಲಿಕೆಗೆ ಬೇಕಿರುವ ಪೌರ ಕಾರ್ಮಿಕರನ್ನು, ವಾಹನಗಳನ್ನು ನೀಡಿದ್ದೇವೆ. ಆದರೆ ನಗರದ ಪ್ರಮುಖ ಬೀದಿಗಳಲ್ಲಿ ಕಸ ಹಾಗೇ ಇದೆ. ಸ್ವಚ್ಛತೆ ಮಾಡುತ್ತಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಇನ್ನು ಮುಂದೆ ನಗರದಲ್ಲಿ ಸ್ವಚ್ಛತೆಯನ್ನು ನಿರ್ಲಕ್ಷಿಸಕೂಡದು. ನಿರ್ಲಕ್ಷ್ಯ ತೋರುವ  ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಲ್ಲರೂ ಸೇರಿ ಕ್ಲೀನ್‌ಸಿಟಿಯನ್ನಾಗಿ (Clean City) ನಿರ್ಮಿಸಲು ಶ್ರಮಿಸಬೇಕು. ನಗರದಲ್ಲಿ ಗಿಡ ನೆಡುವ ಕಾರ್ಯ ಆಗಬೇಕು ಎಂದರು.

ಗಣಿಗಾರಿಕೆಯಿಂದ 2500 ಕೋಟಿ ರೂ ಬಂದಿದೆ

ರಾಜ್ಯದಲ್ಲಿ ಗಣಿಗಾರಿಕೆ ನಡೆದ ಪ್ರದೇಶಗಳಲ್ಲಿ ಸರ್ಕಾರ ಸೆಸ್ ಸಂಗ್ರಹಿಸಲಾಗಿದ್ದು, ಆ ಸೆಸ್ ಹಣದಲ್ಲಿ ತುಮಕೂರಿಗೆ 2500 ಕೋಟಿ ರೂ. ಬಂದಿದೆ. ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳ ಅಭಿವೃದ್ಧಿ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣಕ್ಕೆ ಈ ಹಣವನ್ನು ಬಳಸಲಾಗುತ್ತದೆ ಎಂದು ತಿಳಿಸಿದರು.

ನಗರಪಾಲಿಕೆಯಲ್ಲಿ ಈವರೆಗೂ ಶೇ. 46ರಷ್ಟು ಜನ ತೆರಿಗೆ ಪಾವತಿ ಮಾಡಿದ್ದಾರೆ. ತೆರಿಗೆಯಿಂದ 36 ಕೋಟಿ ರೂ. ಸಂಗ್ರಹವಾಗಿರುವುದು ಅಭಿನಂದನಾರ್ಹ. ಉಳಿಕೆ ಶೇ.54 ರಷ್ಟು ತೆರಿಗೆ ಸಂಗ್ರಹಕ್ಕೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

ಶಾಸಕ ಜಿ.ಬಿ. ಜ್ಯೋತಿಗಣೇಶ್ (Jyothi Ganesh) ಮಾತನಾಡಿ, ತುಮಕೂರು ವಿಸ್ತರಣೆಗಾಗಿ ಗೃಹಸಚಿವರು ತೆಗೆದುಕೊಳ್ಳುವ ನಿರ್ಧಾರಗಳಿಗೆ ನಮ್ಮ ಸಮ್ಮತಿ ಇರುತ್ತದೆ. ಅಮಾನಿಕೆರೆ, ಕ್ರೀಡಾಂಗಣ ಸೇರಿದಂತೆ ಇನ್ನಿತರೆ ತುಮಕೂರಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *