Wednesday, February 5, 2025
Homeರಾಷ್ಟ್ರೀಯSharon Raj Murder | ಪ್ರಿಯಕರನಿಗೆ ವಿಷವಿಟ್ಟು ಕೊಂದ ಪ್ರೇಯಸಿಗೆ ಕೋರ್ಟ್ ನೀಡಿದ ತೀರ್ಪು..?

Sharon Raj Murder | ಪ್ರಿಯಕರನಿಗೆ ವಿಷವಿಟ್ಟು ಕೊಂದ ಪ್ರೇಯಸಿಗೆ ಕೋರ್ಟ್ ನೀಡಿದ ತೀರ್ಪು..?

ಕೇರಳ | ಕೇರಳದ ಶರೋನ್ ರಾಜ್ ಕೊಲೆ (Sharon Raj Murder) ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷದ ಗ್ರೀಷ್ಮಾ ತಿರುವನಂತಪುರಂನ ನೆಯ್ಯಟ್ಟಿಂಕರ ಸೆಷನ್ಸ್ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ. 2022ರಲ್ಲಿ ಗ್ರೀಷ್ಮಾ ತನ್ನ ಪ್ರಿಯಕರ ಶರೋನ್ ರಾಜ್‌ಗೆ ವಿಷ ಬೆರೆಸಿದ ಆಯುರ್ವೇದ ಟಾನಿಕ್ ಕುಡಿಸಿ ಕೊಲೆ ಮಾಡಿದ್ದಳು.

ನ್ಯಾಯಾಲಯ ನೀಡಿದ ತೀರ್ಪು

ಗ್ರೀಷ್ಮಾ ತನ್ನ ವಯಸ್ಸು, ಶೈಕ್ಷಣಿಕ ಸಾಧನೆ, ಮತ್ತು ಹಿಂದೆ ಯಾವುದೇ ಅಪರಾಧ ಮಾಡಿಲ್ಲ ಎಂಬ ಅಂಶಗಳನ್ನು ಉಲ್ಲೇಖಿಸಿ ಶಿಕ್ಷೆಯಲ್ಲಿ ಸಡಿಲಿಕೆ ಕೇಳಿದ್ದರೂ, ಕೋರ್ಟ್ ಅವುಗಳನ್ನು ತಿರಸ್ಕರಿಸಿತು.  586 ಪುಟಗಳ ತೀರ್ಪಿನಲ್ಲಿ, ಗ್ರೀಷ್ಮಾ ಅವರ ಕೃತ್ಯಗಳು ಪ್ಲಾನಿಂಗ್‌ನಿಂದ ನಿರ್ವಹಿತವಾಗಿದ್ದು, ಕ್ರಿಮಿನಲ್ ಹಿನ್ನೆಲೆ ಇಲ್ಲದಂತೆ ತೋರುವ ಮೂಲಕ ಸಂಚು ರೂಪಿಸಿದ್ದೆಂಬುದು ಸಾಬೀತಾಯಿತು. ತೀರ್ಪಿನಲ್ಲಿ, ಗ್ರೀಷ್ಮಾ ತಮ್ಮ ಚಿಕ್ಕಪ್ಪ ನಿರ್ಮಲಕುಮಾರನ್ ನಾಯರ್ ಸಹಾಯದಿಂದ ಈ ಕೊಲೆಯನ್ನು ನಿರ್ವಹಿಸಿದ್ದಳು ಹೀಗಾಗಿ ಕೋರ್ಟ್ ನಿರ್ಮಲಕುಮಾರನ್‌ಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. 

ಶರೋನ್ ರಾಜ್ ಕೊಲೆ (Sharon Raj Murder) ಪ್ರಕರಣದ ವಿವರ

2022ರ ಅಕ್ಟೋಬರ್ 25 ರಂದು ಶರೋನ್ ರಾಜ್ (Sharon Raj Murder) ವಿಷಪೂರಿತ ಆಯುರ್ವೇದ ಟಾನಿಕ್ ಕುಡಿದ ನಂತರ ಅನಾರೋಗ್ಯದಿಂದ ಬಳಲಿದರು.  11 ದಿನಗಳ ತರುವಾಯ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟರು. 

ಗ್ರೀಷ್ಮಾ ತನ್ನ ಪ್ರಿಯಕರ ಶರೋನ್ ಜೊತೆ ಬ್ರೇಕ್‌ಅಪ್ ಮಾಡಲು ಪ್ರಯತ್ನಿಸಿದ್ದಳು. ಆದರೆ ಶರೋನ್ ಒಪ್ಪಿರಲಿಲ್ಲ.  ಕೋಪಗೊಂಡ ಗ್ರೀಷ್ಮಾ, ಆತನನ್ನು ತನ್ನ ಜೀವನದಿಂದ ದೂರ ಮಾಡಲು ಕೀಟನಾಶಕ ಬೆರೆಸಿದ ಜ್ಯೂಸ್ ನೀಡಿ ಕೊಲೆ ಮಾಡಿದ್ದಳು.

ನ್ಯಾಯಾಲಯದ ಪ್ರಾಸಿಕ್ಯೂಶನ್ ವಾದಗಳು

ಗ್ರೀಷ್ಮಾ, ತನ್ನ ಚಿಕ್ಕಪ್ಪ ಮತ್ತು ತಾಯಿಯ ಸಹಾಯದಿಂದ ಕೊಲೆ ಮಾಡಲು ಸಂಚು ರೂಪಿಸಿದ್ದಳು.  ಶರೋನ್ ಅವರ  ಜೊತೆ ಲೈಂಗಿಕ ಸಂಬಂಧ ಬೆಳೆಸುವ ಸಲುವಾಗಿ ಅವನನ್ನು ಮನೆಗೆ ಆಹ್ವಾನಿಸಿದ್ದಳು, ವಿಷಪೂರಿತ ಪಾನೀಯ ನೀಡಿದ್ದಳು. ವಿಷದ ಜ್ಯೂಸ್ ಕುಡಿಸಿದ ನಂತರ ಶರೋನ್ ಆಸ್ಪತ್ರೆಯಲ್ಲಿ 11 ದಿನಗಳ ಕಾಲ ಆರೋಗ್ಯದಿಂದ ಹೋರಾಡಿ ಕೊನೆಗೆ ಮೃತಪಟ್ಟಿದ್ದನು.

ಆತ್ಮಹತ್ಯೆ ನಾಟಕ

ಗ್ರೀಷ್ಮಾ, ತನ್ನ ಬಂಧನದ ನಂತರ ತನಿಖೆಯನ್ನು ತಪ್ಪಿಸಲು ಆತ್ಮಹತ್ಯೆ ನಾಟಕ ಮಾಡಿ, ತನಿಖೆಯನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದ್ದಳು. 

ಗ್ರೀಷ್ಮಾ ಕೃತ್ಯಗಳು ಸಮಾಜಕ್ಕೆ ಹಾನಿಕಾರಕ ಸಂದೇಶ ರವಾನಿಸಿದ್ದವೆಂದು ಕೋರ್ಟ್ ಅಭಿಪ್ರಾಯಪಟ್ಟಿದೆ.  ತೀರ್ಪು ಪ್ರಕಾರ, ಪ್ರೀತಿಯ ಪಾವಿತ್ರ್ಯವನ್ನು ಆಕೆಯ ಸಂಚು ಹಾಳುಮಾಡಿದೆ. 

ಶರೋನ್ ರಾಜ್ ತಾಯಿ ಪ್ರಿಯಾ ಪ್ರತಿಕ್ರಿಯೆ

ಶರೋನ್ ರಾಜ್ (Sharon Raj Murder) ತಾಯಿ, ನ್ಯಾಯಾಲಯವು ಆದರ್ಶ ತೀರ್ಪು ನೀಡಿರುವುದಕ್ಕೆ ಕೃತಜ್ಞರಾಗಿದ್ದೇವೆ ಎಂದು ಹೇಳಿದ್ದಾರೆ.   

ಶರೋನ್ ರಾಜ್ ಕೊಲೆ ಪ್ರಕರಣ ಕೇರಳದಲ್ಲಿ ಭಾರೀ ಸಂಚಲನ ಮೂಡಿಸಿದ್ದಿದ್ದು, ಈ ತೀರ್ಪು ಅಪರಾಧಿಗಳನ್ನು ನಿಯಂತ್ರಿಸಲು ಮಾದರಿಯಾಗಲಿದೆ ಎಂದು ಭಾವಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments