Wednesday, February 5, 2025
Homeಜಿಲ್ಲೆತುಮಕೂರುಕುಂಚಿಟಿಗ ಶ್ರೀಗಳನ್ನ ಭೇಟಿ ಮಾಡಿದ ಡಾ. ಜಿ. ಪರಮೇಶ್ವರ್ : ಜಯಚಂದ್ರಗೆ ಸಿಗುತ್ತಾ ಮಂತ್ರಿ ಗಿರಿ..!

ಕುಂಚಿಟಿಗ ಶ್ರೀಗಳನ್ನ ಭೇಟಿ ಮಾಡಿದ ಡಾ. ಜಿ. ಪರಮೇಶ್ವರ್ : ಜಯಚಂದ್ರಗೆ ಸಿಗುತ್ತಾ ಮಂತ್ರಿ ಗಿರಿ..!

ತುಮಕೂರು | ಕಾಂಗ್ರೆಸ್ ಸರ್ಕಾರದಲ್ಲಿ ಗೃಹ ಸಚಿವರಾದ ನಂತರ ಡಾ. ಜಿ. ಪರಮೇಶ್ವರ್ ಅವರು ಶ್ರೀ ನರಸಿಂಹ ಗಿರಿ ಸುಕ್ಷೇತ್ರ ಕುಂಚಿಟಿಗರ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ಮಹಾನ್ ದೈವ ಭಕ್ತರಾಗಿ ಶ್ರೀಗಳ ಆಶೀರ್ವಾದ ಪಡೆಯುತ್ತ ಅವರ ಮಾರ್ಗದರ್ಶನದಲ್ಲಿ ತಮ್ಮ ಸೇವೆಯನ್ನು ಮುಂದುವರೆಸಿರುವ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಪರಮೇಶ್ವರ್ ಅವರು, ಶ್ರೀಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ವೇದ ಬ್ರಹ್ಮ ಶ್ರೀ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಕುಶಲೋಪರಿ ವಿಚಾರಿಸಿದರು.

ಇನ್ನೂ ಇತ್ತೀಚಿಗಷ್ಟೇ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಟಿ ಬಿ ಜಯಚಂದ್ರ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ್ದು ಈ ಹಿನ್ನಲೆಯಲ್ಲಿ ಅವರ ಹಿಂಬಾಲಕರು, ಬೆಂಬಲಿಗರು, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ನಡುವೆ ಪರಮೇಶ್ವರ್ ಸ್ವಾಮೀಜಿಗಳ ಭೇಟಿ ಅದೆಲ್ಲವನ್ನು ತಣ್ಣಗೆ ಮಾಡುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments