Deadly Accident | ಕರ್ನೂಲ್ ನ ಡೆಡ್ಲಿ ಆಕ್ಸಿಡೆಂಟ್ ನಲ್ಲಿ ಕೊನೆಯುಸಿರೆಳೆದ ತುಮಕೂರಿನ ಮೂವರು

ಆಂದ್ರಪ್ರದೇಶ | ಕರ್ನೂಲಿನಲ್ಲಿ (Kurnool) ನಡೆದ ಅಪಘಾತದಲ್ಲಿ (Deadly Accident) ತುಮಕೂರು ಜಿಲ್ಲೆ (Tumkur District) ಚಿ ನಾ ಹಳ್ಳಿ ತಾಲೂಕಿನ ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಕೆಂಕೆರೆಯ  ನವೀನ್, ಪ್ರಥಮ ದರ್ಜೆ ಗುತ್ತಿಗೆದಾರ ಸಂತೋಷ್  ಕುಮಾರ್ ಮತ್ತು ಕೆಂಕೆರೆಯವರೇ ಆದ ಲೋಕೇಶ್ (ಕಾಮಶೆಟ್ಟಿ) ಸಾವನ್ನಪ್ಪಿದ್ದಾರೆ.

ಭಾನುವಾರ ಮೇ 18ರಂದು ಸಂತೋಷ್ ಅವರ ಹುಟ್ಟುಹಬ್ಬ ಹಿನ್ನಲೆ  ಮಂತ್ರಾಲಯಕ್ಕೆ ತೆರಳಿದ ಇವರು, ಅಲ್ಲಿಂದ ಭಾನುವಾರ ಬೆಳಗ್ಗೆ ಶ್ರೀಶೈಲಕ್ಕೆ ಹೋಗಿ ನಂತರ ಮಹಾನಂದಿ ದರ್ಶನ ಮಾಡಿ ವಾಪಸ್ಸು ಬರುವಾಗ ಆಂಧ್ರದ ಕರ್ನೂಲ್ ಬಳಿ ಭಾನುವಾರ ರಾತ್ರಿ 7:30ರ ಸುಮಾರಿಗೆ ಅಪಘಾತ ನಡೆದಿದೆ ಎನ್ನಲಾಗಿದೆ.

ಈ ಮೂವರು ಸಾವನ್ನಪ್ಪಿ ಇನ್ನೋವಾ ಕಾರಿನಲ್ಲಿ ಇದ್ದ ಇನ್ನು ಮೂರು ಜನಕ್ಕೆ ಸಣ್ಣ ಪುಟ್ಟ ಗಾಯಗಳಾಗಿವೆ. ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದ, ಸೋಮವಾರ ಸಂಜೆ ಸುಮಾರಿಗೆ ಮೃತರನ್ನು ಸ್ವಸ್ಥಳ ಕೆಂಕೆರೆಗೆ ತರಲಾಗುತ್ತದೆ ಎಂದು ಆಪ್ತ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *