ಬೆಂಗಳೂರು | ದೇವರು ಮತ್ತು ಧರ್ಮ ಬಿಜೆಪಿಯವರ ವ್ಯಕ್ತಿಗತ ಆಸ್ತಿಯೇ..? ಪೂಜಾ ಕಾರ್ಯಗಳನ್ನು ನಡೆಸಲು ಬಿಜೆಪಿ ಮಾತ್ರ ಹಕ್ಕುದಾರರೇ..? ನೀರಿಗೆ, ಗಾಳಿಗೆ, ಬೆಳಕಿಗೆ ಜಾತಿಯಿದೆಯೇ.? ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಾವು ಕೆಆರ್ಎಸ್ ಬಳಿ ಕಾವೇರಿ ಆರತಿ (Cauvery Aarti) ಕಾರ್ಯಕ್ರಮ ಆಯೋಜಿಸಲು ಮುಂದಾಗಿದ್ದೇವೆ. ಇದರ ಪೂರ್ವಭಾವಿಯಾಗಿ ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಕಾರ್ಯಕ್ರಮ ನಡೆಸಲಾಯಿತು. ಅದರಲ್ಲಿ ಸುಮಾರು 25,000 ಜನರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಯಶಸ್ಸು ನೋಡಿ ಸ್ಥಳೀಯ ಬಿಜೆಪಿ ಶಾಸಕರು ಗಾಬರಿಯಾದರು ಎಂದು ಅವರು ಹೇಳಿದರು.

ಈ ವಿಚಾರದಲ್ಲಿ ರೈತ ಸಂಘದವರು ಟೀಕೆ ಮಾಡಿದ್ದಾರೆ. ಅವರನ್ನು ಕರೆದು ಮಾತುಕತೆ ನಡೆಸಲಾಗುವುದು. ಆದರೆ ಟೀಕೆಗಳನ್ನು ನಿಲ್ಲಿಸಲಾಗದು. ಟೀಕೆಗಳಿಲ್ಲದೇ ಯಾವ ಕಾರ್ಯವೂ ಸಾಧ್ಯವಿಲ್ಲ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.
ನಾವು ಎಲ್ಲರೂ ಒಟ್ಟಾಗಿ ಸಮಾಜವನ್ನು ಮುಂದಕ್ಕೆ ಕೊಂಡೊಯ್ಯಬೇಕು. ಟೀಕೆಗಳನ್ನು ಬದಿಗೊತ್ತಿಕೊಂಡು ಕಾರ್ಯ ನಿರ್ವಹಿಸುತ್ತೇವೆ ಎಂದು ಡಿಸಿಎಂ ಧೈರ್ಯವಂತರ ಅಭಿಪ್ರಾಯ ವ್ಯಕ್ತಪಡಿಸಿದರು.