ತುಮಕೂರು | ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಅಮೃತೂರು ಪೊಲೀಸ್ ಠಾಣೆಯಲ್ಲಿ (Amrutur Police Station) ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಕಾನ್ಸ್ಟೇಬಲ್ (Female Constable) ಮತ್ತು ಪುರುಷ ಪೇದೆಯ (Male Constable) ನಡುವಿನ ಸಂಬಂಧ ವಿವಾದಾತ್ಮಕ ತಿರುವು ಪಡೆದಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಮನಾಪುರ ಗ್ರಾಮದ ನಿವಾಸಿ ಭಗವಂತರಾಯ ಬಿರಾದಾರ (Bhagwantraya Biradar) ಎಂಬ ಪೇದೆ, ಮಹಿಳಾ ಕಾನ್ಸ್ಟೇಬಲ್ಗೆ ಮದುವೆಯಾಗುವುದಾಗಿ ಭರವಸೆ ನೀಡಿದ್ದನು. 2023ರ ಫೆಬ್ರವರಿ 14ರಂದು ಮಹಿಳಾ ವಸತಿ ಗೃಹದಲ್ಲಿ ಸಾಯಿಬಾಬಾ ದೇವರ ಮುಂದೆ ತಾಳಿ ಕಟ್ಟಿ, ಮದುವೆಯಂತೆಯೇ ನಡೆದು ದೈಹಿಕ ಸಂಬಂಧ ಬೆಳೆಸಿದನು ಎಂದು ಮಹಿಳಾ ಪೇದೆ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆ ಕುರಿತು ಮಾತನಾಡಿದಾಗ, ತಾನೇನೂ ಮದುವೆಯಾಗಿಲ್ಲ ಎಂದು ಬೈದು, ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿಯ ಅವಹೇಳನ ಮಾಡಿದ್ದಾನೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ಮೇಲಾಗಿ ₹20 ಲಕ್ಷ ರೂ. ತರಬೇಕೆಂದು ಒತ್ತಾಯಿಸಿದ್ದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೇದೆ ಭಗವಂತರಾಯ, ಬಳಿಕ ತನ್ನ ಸಮುದಾಯದ ಇನ್ನೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವಿಚಾರ ತಿಳಿದ ಮಹಿಳಾ ಪೇದೆ ಅಮೃತೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಠಾಣೆಯ ಸಬ್-ಇನ್ಸ್ಪೆಕ್ಟರ್ ನಾಗಭೂಷಣ್ ಮೇಲೂ ಸಹಾಯ ಮಾಡಿದರೆಂದು ದೂರಿನಲ್ಲಿ ಉಲ್ಲೇಖವಿದೆ. ಅವರು “ಈ ವಿಷಯ ಹೊರಗೆ ಬಂದರೆ ನಿನ್ನ ವಿರುದ್ಧ ಅಪಪ್ರಚಾರ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಮಾಡಲಾಗಿದೆ.
ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಮತ್ತು ಆರೋಪಿಗಳಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.