ಹುಬ್ಬಳ್ಳಿ ಧಾರವಾಡ | ವಿಜಯದಶಮಿ (Vijayadashami) ನಿಮತ್ತ ಹುಬ್ಬಳ್ಳಿ ಮಹಾನಗರದಿಂದ ಇಂದು (ಅ.29) ರಾಷ್ಟ್ರೀಯ ಸ್ವಯಂಸೇವಕ ಸಂಘದ (Rastriya swayam sevaka sanga) ಪಥಸಂಚಲನ ನಡೆಯಲಿದೆ. ಹೀಗಾಗಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ (Hubli) ಮದ್ಯ ಮಾರಾಟವನ್ನು ಬಂದ್ ಮಾಡಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ (Hubli-Dharwad Commissioner of Police) ರೇಣುಕಾ ಸುಕುಮಾರ ಆದೇಶ ಹೊರಡಿಸಿದ್ದಾರೆ.
ಆರ್ಎಸ್ಎಸ್ ಪಥಸಂಚಲನ ಇಂದು ಮಧ್ಯಾಹ್ನ 2:30 ನೆಹರು ಮೈದಾನದಿಂದ ಆರಂಭವಾಗುತ್ತದೆ. ಈ ಹಿನ್ನಲೆಯಲ್ಲಿ ಮುಂಜಾಗೃತೆಯಾಗಿ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ನಾಳೆ (ಅ.30) ಬೆಳಿಗ್ಗೆ ಆರು ಗಂಟೆವರೆಗೂ ಮದ್ಯ ಮರಾಟ ಮತ್ತು ಮದ್ಯ ಸಾಗಾಟ ಬಂದ್ ಮಾಡಲಾಗಿದೆ. ಪಥ ಸಂಚಲನ ವೇಳೆ ಮದ್ಯಪಾನ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.