ದಕ್ಷಿಣ ಕನ್ನಡ | ಕರ್ನಾಟಕದಲ್ಲಿ ಮುಂಗಾರು ಮಳೆ ನಿರೀಕ್ಷೆಗೂ ಮೊದಲು ಪ್ರವೇಶಿಸಿದ್ದು, ಶುರುವಾಗಿನೇ ಭಾರೀ ಅವಾಂತರಗಳಿಗೆ ಕಾರಣವಾಗುತ್ತಿದೆ. ಕರಾವಳಿ (Coastal Karnataka) ಭಾಗಗಳಲ್ಲಿ ನಿರಂತರ ಮಳೆಯಿಂದಾಗಿ ದೈನಂದಿನ ಜೀವನ ಅಸ್ತವ್ಯಸ್ತವಾಗಿದೆ.
(Coastal Karnataka) ಪುತ್ತೂರಿನಲ್ಲಿ ಮರ ಬಿದ್ದು ಕಾರು ನಜ್ಜುಗುಜ್ಜು
ದಕ್ಷಿಣ ಕನ್ನಡ ಜಿಲ್ಲೆಯ (Coastal Karnataka) ಪುತ್ತೂರು ತಾಲೂಕಿನ ಕಡಬದಲ್ಲಿ, ಭಾರೀ ಗಾಳಿ ಮಳೆಗೆ ಬೃಹತ್ ಮರ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಸಂಪೂರ್ಣ ನಾಶವಾಗಿದೆ. ಘಟನೆಯ ವೇಳೆ ಕಾರಿನೊಳಗೆ ಇಬ್ಬರು ಮಕ್ಕಳೊಡನೆ ಆರು ಮಂದಿ ಇದ್ದರೂ, ಅವರೆಲ್ಲರೂ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಗಾಯಗೊಂಡವರು ಶಿವಮೊಗ್ಗ ಮೂಲದವರಾಗಿದ್ದು, ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಇದನ್ನು ಓದಿ : Shreyas Iyer | ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ವೀರೇಂದ್ರ ಸೆಹ್ವಾಗ್
ಪುತ್ತೂರು ನಗರಸಭೆಯ ಕಾಂಪೌಂಡ್ ಕುಸಿದು ಮೂರು ಆಟೋಗಳಿಗೆ ಹಾನಿಯಾಗಿದೆ. ಮಹಾಲಿಂಗೇಶ್ವರ ದೇಗುಲದ ಬಳಿ ಗೋಡೆ ಕುಸಿತದಿಂದ ಓರ್ವ ಮಹಿಳೆ ಗಾಯಗೊಂಡಿದ್ದಾರೆ.
ಮಂಗಳೂರಿನಲ್ಲಿ ಮಳೆಯ ಪ್ರಭಾವದಿಂದ ಪಂಪ್ವೆಲ್ ಸರ್ಕಲ್ ನದಿಯಂತೆ ಪರಿವರ್ತನೆಯಾಗಿದೆ. ಹಲವೆಡೆ ಅಂಗಡಿ-ಹೋಟೆಲ್ಗಳಿಗೆ ಮಳೆ ನೀರು ನುಗ್ಗಿದ್ದು ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಅಡ್ಯಾರ್ ಪ್ರದೇಶದಲ್ಲಿ ಚರಂಡಿ ನೀರು ಬಾವಿ ಮತ್ತು ಗದ್ದೆಗಳಿಗೆ ಸೇರುತ್ತಿರುವುದು ಸಂಕಷ್ಟವನ್ನ ತರುತ್ತಿದೆ.
ಉಡುಪಿಯ ಮಲ್ಪೆ ಬೀಚ್ನಲ್ಲಿ ಅಲೆಗಳು ಭೀತಿಜನಕವಾಗಿದ್ದರೂ ಪ್ರವಾಸಿಗರು ಅಪಾಯದ ನಡುವೆಯೂ ರಿಸ್ಕಿ ಫೋಟೋಶೂಟ್ಗಳಲ್ಲಿ ತೊಡಗಿರುವುದು ಆತಂಕಕ್ಕೆ ಕಾರಣವಾಗಿದೆ.

ಕಾರವಾರದ (Karwar) ಸುಂಕೇರಿಯಲ್ಲಿ ಕಾಲು ಜಾರಿ ಕಾಳಿ ನದಿಗೆ ಬಿದ್ದ ಯುವಕನ ಮೃತದೇಹ ಪತ್ತೆಯಾಗಿದೆ. ಇದೇ ವೇಳೆ, ಕುಮಟಾದ ಮೂರೂರು-ಹರಕಡೆ ರಸ್ತೆಯಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಬಂಡೆಗಳು ರಸ್ತೆಗೆ ಜಾರಿದ ಕಾರಣ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಜೀವನದಿ ನೇತ್ರಾವತಿ, ಅಡಕೆ ತೋಟಗಳ ಪ್ರವಾಹ, ಬಳ್ಳಿಗಳ ಜಲಾವೃತ ಪ್ರದೇಶಗಳು – ಇವೆಲ್ಲವೂ ಮುಂಗಾರು ಮಳೆ ಪ್ರವೇಶದ ಭಾರೀ ಪರಿಣಾಮಗಳಾಗಿ ಕಾಡುತ್ತಿವೆ.