Priyank Kharge | ಬಿಜೆಪಿ ಪ್ರತಿಭಟನೆಗೆ ಖಡಕ್ ಕೌಂಟರ್ ಕೊಟ್ಟ ಪ್ರಿಯಾಂಕ್ ಖರ್ಗೆ

ಬೆಂಗಳೂರು | ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಬಿಜೆಪಿ ನಾಯಕರು ಹಾಗೂ ಮಾಜಿ ಸಿಎಂಗಳ ವಿರುದ್ಧ ಹರಿಹಾಯ್ದಿದ್ದಾರೆ. ಕಲಬುರಗಿಯಲ್ಲಿ ನಡೆದ ಬೃಹತ್ ಪ್ರತಿಭಟನೆಯ ಬಗ್ಗೆ ಮಾತನಾಡಿದ ಅವರು, ನನ್ನ ಕ್ಯಾಬಿನೆಟ್‌ನಿಂದ ಕೈ ಬಿಡಬೇಕು ಅಂತಾ ಪ್ರತಿಭಟಿಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ.

ಕಾಂಗ್ರೆಸ್‌ನವರು ಪ್ರಧಾನ ಮಂತ್ರಿ ಮೋದಿ ಅವರ ವಿರುದ್ಧ ಪ್ರಶ್ನೆ ಮಾಡಬಾರದೆಂದು ಬಿಜೆಪಿಯವರು ಹೇಳ್ತಿದ್ದಾರೆ. ದೇಶದ ಆರ್ಥಿಕ ವಿಚಾರಗಳ ಬಗ್ಗೆ ಪ್ರಶ್ನೆ ಮಾಡಿದರೂ ಸಹ ಏನು ತಪ್ಪು ಅಂತಾ ರಾಜಕೀಯ ತಿರುವು ಕೊಡ್ತಿದ್ದಾರೆ (Priyank Kharge) ಎಂದರು.

ರಿಪಬ್ಲಿಕ್ ಆಫ್ ಕಲಬುರಗಿ ಎಂದವರಿಗೆ ಪ್ರಿಯಾಂಕ್ ಖರ್ಗೆ (Priyank Kharge) ಟಾಂಗ್

ಈವತ್ತು ‘ರಿಪಬ್ಲಿಕ್ ಆಫ್ ಕಲಬುರಗಿ’ ಅಂತಾ ಹೋಗಿದ್ದಾರೆ. ನಾರಾಯಣಸ್ವಾಮಿ ಅಲ್ಲಿ ಅಳುತ್ತಾ, ‘ನನ್ನ ಮೇಲೆ ಅತ್ಯಾಚಾರ ಆಗಿದೆ’ ಅಂತಾ ನಟನೆ ಮಾಡ್ತಿದ್ದಾರೆ. ನಾಯಿ ಬೈದಿದ್ದು ನಾನು, ಅಳುತ್ತಿರುವದು ಅವರು ಎಂದು ಟೀಕಿಸಿದರು.

ಅಧಿಕಾರದಲ್ಲಿದ್ದಾಗ ಒಬ್ಬರೂ ಕಲಬುರಗಿಗೆ ಬಂದಿಲ್ಲ. ಆದರೆ ಈಗ ನನ್ನ ವಿರುದ್ಧ ನಾಲ್ಕು ಬಾರಿ ಭೇಟಿ ಕೊಟ್ಟು ಪ್ರತಿಭಟನೆ ಮಾಡ್ತಿದ್ದಾರೆ. ಹಾಲಿನ ಪೌಡರ್ ಕಳ್ಳನ ಪರವಾಗಿ ಬಂದಿದ್ದಾರೆ. ಆತನ ಬಗ್ಗೆ ‘ಮರ್ಡರ್ ಎಟೆಂಪ್ಟ್’ ಅನ್ನೋ ಆರೋಪವಿತ್ತು, ಆದರೆ ವರದಿಯಲ್ಲಿ ಕುಡಿದು ಗಲಾಟೆ ಮಾಡಿಕೊಂಡಿದ್ದಾಗಿ ಬಂದಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ : Profitable Business | ಈ ಉದ್ಯಮಗಳನ್ನ ಆರಂಭಿಸಿದ್ರೆ ವರ್ಷ ಪೂರ್ತಿ ಆದಾಯ ಗ್ಯಾರಂಟಿ..!

ಬೀದರ್‌ನ ಸಿದ್ದು ಪಾಂಚಾಲ್ ಡೆತ್ ನೋಟ್ ವಿಚಾರ ಎಲ್ಲಿ ಮಾಯವಾಗಿದೆ? ಯಾಕೆ ಅದನ್ನ ಸದನದಲ್ಲಿ ಪ್ರಸ್ತಾಪಿಸಿಲ್ಲ? ಅಕ್ಕಿ ಕಳ್ಳನಿಗೆ ಟಿಕೆಟ್ ಕೊಟ್ಟು ಬಂದಿದ್ದೀರಿ, ನಿಮಗೆ ಕಾಮನ್ ಸೆನ್ಸ್ ಇದ್ರೆ ಸಾಕು ಎಂದರು.

ಬಿಜೆಪಿಯವರು ಪಾಕಿಸ್ತಾನ, ಮುಸ್ಲಿಂ, ನಿಜಾಂ, ರಜಾಕರು ಮಾತುಗಳಿಂದ ಜನರನ್ನು ಭ್ರಮೆಗೊಳಿಸುತ್ತಿದ್ದಾರೆ. ಅಖಂಡ ಭಾರತ ಕನಸು ಅಂದರೆ ಪಾಕಿಸ್ತಾನಕ್ಕೆ ಹೋಗಿ ಶುರು ಮಾಡಿ ಎಂದು ಚಾಟಿ ಬೀಸಿದರು.

ನನಗೆ ‘ಕರ್ನಾಟಕದ ಪಪ್ಪು’ ಅಂತಾರೆ. ಹತ್ತು ಸಾಲು ಕನ್ನಡ ಕೂಡ ಮಾತಾಡದವರೇ ‘ಪಪ್ಪು’ ಆಗಬೇಕಲ್ಲವೇ? ಬನ್ನಿ, ಯಾರು ಪಪ್ಪು ಅಂತಾ ಚರ್ಚೆ ಮಾಡೋಣ, ಎಂದು ಪ್ರಿಯಾಂಕ್ ಖರ್ಗೆ ಸವಾಲ್ ಹಾಕಿದರು.

Leave a Reply

Your email address will not be published. Required fields are marked *