ತುಮಕೂರು | ಮಹಾನಗರ ಪಾಲಿಕೆ ವ್ಯಾಪ್ತಿಯ ಕುಣಿಗಲ್ ರೈಲ್ವೆ ಅಂಡರ್ಪಾಸ್ (Kunigal Underpass) ರಸ್ತೆಯಲ್ಲಿ ದುರಸ್ಥಿ ಕಾಮಗಾರಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಮೇ 24 ರಿಂದ ಮುಂದಿನ 30 ದಿನಗಳವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ (District Collector Shubhakalyan) ತಿಳಿಸಿದ್ದಾರೆ. ಇದರಿಂದಾಗಿ, ಕುಣಿಗಲ್ ಅಂಡರ್ಪಾಸ್ (Kunigal Underpass) ಮಾರ್ಗವಾಗಿ ಹೋಗುತ್ತಿದ್ದ ವಾಹನಗಳು ಈಗ ಬದಲಿ ಮಾರ್ಗಗಳಲ್ಲಿ ಸಂಚರಿಸಬೇಕಾಗುತ್ತದೆ.
ಇದನ್ನು ಓದಿ : SSLC exam | ಎಸ್.ಎಸ್.ಎಲ್.ಸಿ ಪರೀಕ್ಷೆ-2 ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳೆಷ್ಟು ಜನ ಗೊತ್ತಾ..?
(Kunigal Underpass) ಹೊಸ ಸಂಚಾರ ಮಾರ್ಗಗಳು
ಲಕ್ಕಪ್ಪ ಸರ್ಕಲ್ ಇಂದ ಕುಣಿಗಲ್ ಕಡೆಗೆ : ಲಕ್ಕಪ್ಪ ಸರ್ಕಲ್ → ಗುಬ್ಬಿ ರಿಂಗ್ರೋಡ್ ಜಂಕ್ಷನ್ → ಕುಣಿಗಲ್ ಜಂಕ್ಷನ್.
ಕುಣಿಗಲ್ ಕಡೆಯಿಂದ ಲಕ್ಕಪ್ಪ ಸರ್ಕಲ್ ಕಡೆಗೆ: ಕುಣಿಗಲ್ ಜಂಕ್ಷನ್ → ಗುಬ್ಬಿ ರಿಂಗ್ರೋಡ್ ಜಂಕ್ಷನ್ → ಲಕ್ಕಪ್ಪ ಸರ್ಕಲ್.
ಸದಾಶಿವನಗರ, ಬನಶಂಕರಿ, ಎಸ್ಎಸ್ಐಟಿ ಕಡೆಗಳಿಂದ ಲಕ್ಕಪ್ಪ ಸರ್ಕಲ್ ಕಡೆಗೆ: ಹೇಮಾವತಿ ಕಛೇರಿ ಮುಂಭಾಗದ ರಸ್ತೆ → ದಾನಾ ಪ್ಯಾಲೇಸ್ → ಗುಬ್ಬಿ ರಿಂಗ್ರೋಡ್ ಜಂಕ್ಷನ್ → ಲಕ್ಕಪ್ಪ ಸರ್ಕಲ್.
ಲಕ್ಕಪ್ಪ ಸರ್ಕಲ್ ನಿಂದ ಸದಾಶಿವನಗರ, ಬನಶಂಕರಿ, ಎಸ್ಎಸ್ಐಟಿ ಕಡೆಗೆ: ಲಕ್ಕಪ್ಪ ಸರ್ಕಲ್ → ಗುಬ್ಬಿ ರಿಂಗ್ರೋಡ್ ಜಂಕ್ಷನ್ → ದಾನಾ ಪ್ಯಾಲೇಸ್ ಸಿಗ್ನಲ್ → ಹೇಮಾವತಿ ಕಛೇರಿ ರಸ್ತೆ.

ಕುಣಿಗಲ್ ಅಂಡರ್ಪಾಸ್ನ (Kunigal Underpass) ಹದಗೆಟ್ಟ ಸ್ಥಿತಿಯ ಕುರಿತು ಹಲವು ಬಾರಿ ಮಾಧ್ಯಮಗಳಲ್ಲಿ ವರದಿ ಮಾಡಿದ ಹಿನ್ನೆಲೆಯಲ್ಲಿ ಈ ದುರಸ್ತಿ ಕಾರ್ಯ ಆರಂಭವಾಗಿದೆ.
ಸಾರ್ವಜನಿಕರು ಈ ಬದಲಾವಣೆಗಳಿಗೆ ಸೂಕ್ತವಾಗಿ ತಕ್ಕಮಟ್ಟಿಗೆ ತಮ್ಮ ಸಂಚಾರ ಯೋಜನೆ ರೂಪಿಸಿಕೊಳ್ಳಬೇಕಾಗಿದೆ.