Elephants of Karnataka | ಆಂದ್ರಪ್ರದೇಶಕ್ಕೆ ಹೊರಟ ಕರ್ನಾಟಕದ ಹೆಮ್ಮೆಯ 6 ಕುಮ್ಕಿ ಆನೆಗಳು..!

ಬೆಂಗಳೂರು | ರಾಜ್ಯದಲ್ಲಿ 6395 ಆನೆಗಳು (Elephants of Karnataka) ಇದ್ದು, ಇಡೀ ದೇಶದಲ್ಲೇ ಅತಿ ಹೆಚ್ಚು ಆನೆ ಸಂಪತ್ತನ್ನು ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಈ ಆನೆಗಳನ್ನು (Kumki Elephant) ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಹೇಳಿದ್ದಾರೆ.

ಇಂದು ಆಂಧ್ರಪ್ರದೇಶ ಸರ್ಕಾರಕ್ಕೆ ಆರು ಕುಮ್ಕಿ ಆನೆಗಳನ್ನು (Elephants of Karnataka) ಹಸ್ತಾಂತರಿಸುವ ಸಮಾರಂಭದಲ್ಲಿ ಮಾತನಾಡಿ, ಮಾನವ-ಆನೆ ಸಂಘರ್ಷ ತಡೆಗಟ್ಟಲು ಪಕ್ಕದ ರಾಜ್ಯಗಳ ಸಹಕಾರ ಅತ್ಯವಶ್ಯಕ. ಇತ್ತೀಚಿನ ದಿನಗಳಲ್ಲಿ ಮಾನವ-ಆನೆ ಸಂಘರ್ಷದ ಪ್ರಮಾಣ ಹೆಚ್ಚಾಗಿದೆ. ಇದರಿಂದ ಜೀವಹಾನಿ, ಬೆಳೆ ನಷ್ಟ ಸಂಭವಿಸುತ್ತಿದೆ. ಈ ಸಮಸ್ಯೆಯನ್ನು ತಡೆಗಟ್ಟಲು ಎಲ್ಲಾ ರಾಜ್ಯಗಳ ಸಹಕಾರ ಅಗತ್ಯ. ಇದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು.

ಆಗಸ್ಟ್ ತಿಂಗಳಲ್ಲಿ ಆಂಧ್ರಪ್ರದೇಶದ ಅರಣ್ಯ ಸಚಿವರಾದ ಪವನ್ ಕಲ್ಯಾಣ್ ಅವರ ನೇತೃತ್ವದಲ್ಲಿ ಕರ್ನಾಟಕಕ್ಕೆ ಬಂದು ಆನೆಗಳಿಗಾಗಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಕರ್ನಾಟಕ ಸರ್ಕಾರ, ಎಂಟು ಆನೆಗಳ ಬೇಡಿಕೆಗೆ ಪ್ರತಿಯಾಗಿ ಆರು ಆನೆಗಳನ್ನು ಹಸ್ತಾಂತರಿಸಲು ಸಮ್ಮತಿಸಿದೆ. ಇಂದು ಮೊದಲ ಹಂತದಲ್ಲಿ ನಾಲ್ಕು ಆನೆಗಳನ್ನು ಅಧಿಕೃತವಾಗಿ ಹಸ್ತಾಂತರ ಮಾಡಲಾಗಿದೆ.

ಆಂಧ್ರ ಮಾವುತರಿಗೆ ಅಗತ್ಯ ತರಬೇತಿಯನ್ನು ಕೂಡ ಕರ್ನಾಟಕ ಸರ್ಕಾರ ಒದಗಿಸಿದೆ. ಆನೆಗಳನ್ನು ನಿಯಂತ್ರಿಸಲು ಮತ್ತು ಮಾನವ ಸಂಘರ್ಷ ತಪ್ಪಿಸಲು ತರಬೇತಿ ಅವಶ್ಯಕವಾಗಿದ್ದು, ನಾವು ಆ ಬಗ್ಗೆ ಸಹಕಾರ ನೀಡುತ್ತಿದ್ದೇವೆ ಎಂದರು.

ಹಸ್ತಾಂತರಿಸಲಾದ ಆನೆಗಳ ವಿವರ

1. ಕೃಷ್ಣ – 15 ವರ್ಷದ ಆನೆ, 2022ರಲ್ಲಿ ಚಿಕ್ಕಮಗಳೂರಿನಲ್ಲಿ ಸೆರೆ ಹಿಡಿಯಲಾಗಿತ್ತು.

2. ಅಭಿಮನ್ಯು – 14 ವರ್ಷದ ಆನೆ, 2023ರಲ್ಲಿ ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯಲ್ಲಿ ಸೆರೆ ಹಿಡಿಯಲಾಗಿತ್ತು.

3. ದೇವ – 39 ವರ್ಷದ ಆನೆ, 2019ರಲ್ಲಿ ಕುಶಾಲನಗರದಲ್ಲಿ ಸೆರೆ ಹಿಡಿಯಲಾಗಿತ್ತು.

4. ರಂಜನ್ – 26 ವರ್ಷದ ಆನೆ, ದುಬಾರೆ ಶಿಬಿರದಲ್ಲಿ ಜನಿಸಿತ್ತು.

Leave a Reply

Your email address will not be published. Required fields are marked *